ಭಾಗ 4 ರಾಜ್ಯ ನಿರ್ದೇಶಕ ತತ್ವಗಳು, ಭಾಗ 4ಎ - ಮೂಲಭೂತ ಕರ್ತವ್ಯಗಳು
ಭಾಗ 4 ರಾಜ್ಯ ನಿರ್ದೇಶಕ ತತ್ವಗಳು 36 ರಿಂದ 51ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಸುಖಿ ರಾಜ್ಯ ಅಥವಾ ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿಕೊಂಡಿರುವ ತತ್ವಗಳೇ ರಾಜ್ಯ ನಿರ್ದೇಶಕ ತತ್ವಗಳು. ರಾಜ್ಯ ನಿರ್ದೇಶಕ ತತ್ವಗಳು ಗಾಂಧಿ ತತ್ವ, ಸಮಾಜವಾದಿ ತತ್ವ ಮತ್ತು ಉದಾರವಾದಿ ತತ್ವ ಇವುಗಳ ಮೇಲೆ ರೂಪಿತವಾಗಿವೆ. ಪ್ರಜೆಗಳಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸುವ ಉದ್ದೇಶದಿಂದ ಈ ತತ್ತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಈ ತತ್ವಗಳನ್ನು ಕಡ್ಡಾಯವಾಗಿ ಪಾಲಿಸುವ ನಿಯಮವಿಲ್ಲ ಆದ್ದರಿಂದ ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ನಾಲ್ಕನೇ ಭಾಗವನ್ನು “ Novel feauture ” ಎಂದು ಕರೆದಿದ್ದಾರೆ. 36 - ರಾಜ್ಯ ನಿರ್ದೇಶಕ ತತ್ವದಲ್ಲಿ ಬಳಸಿರುವ ರಾಜ್ಯ ಎಂಬ ಪದವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಮತ್ತು ಸ್ಥಳೀಯ ಪ್ರಾಧಿಕಾರ ಇವುಗಳನ್ನು ಒಳಗೊಂಡಿರುತ್ತದೆ 37 - ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ 38 - ಜನರ ಕಲ್ಯಾಣಕ್ಕಾಗಿ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ವ್ಯವಸ್ಥೆಯನ್ನು ಸರ್ವತೋಮುಖವಾಗಿ ವ್ಯವಸ್ಥಿತಗೊಳಿಸುವುದು 38ಎ - ಆರ್ಥಿಕ ಅಸಮತೋಲನ ನಿವಾರಣೆ. 1978ರ 44ನೇ ತಿದ್ದುಪಡಿ 39 - ರಾಜ್ಯವು ಜನರ ಆರ್ಥಿಕ ಮತ್ತು ಸಾಮಾಜಿಕ ಶೋಷಣೆ ತ...